Friday 7 October 2016

ಕಾಣದ ದಾರಿಯಲಿ..






ಭ್ರಮೆಯ ಪರದೆ ಸರಿಸಿ ನೋಡು
ವಾಸ್ತವದ ಕನ್ನಡಿ
ಗುರಿ ಇರದ ದಾರಿಯಲಿ
ಹೊಸ ಬದುಕಿನ ಮುನ್ನುಡಿ
ಬರೆಯಲೇನು ಮರಳ ಬರಹ?
ಮರುಭೂಮಿಯ ನೆರಳದು!
ಕುಡಿಯಲೇನು ಮೃಗಜಲವಾ
ದಾಹ ನೀಗದು
ಹಿಡಿಯಲೇನು ಮನ ಪತಂಗ
ಮಕರಂದವ ಸವಿಯದು!
ಮಿಡಿವುದೇನು ಹರಿದ ತಂತಿ
ನಾದವೆಂದು ಕೇಳದು

No comments:

Post a Comment