ಕಂಡದ್ದೆಲ್ಲ ಕೈಗೆಟುಕಬೇಕು
ಸಿಕ್ಕಿದ್ದೆಲ್ಲ ಮೆಲ್ಲಬೇಕು
ಚಪಲ ಚೆನ್ನಿಗ, ಹುಟ್ಟಿದ್ದು ಮೇಷ ರಾಶಿ
ರಾಜಕಾರಣಿ, ಅಧಿಕಾರಿ ಜನಿಸಿದ್ದೂ ಇದೇ ಮೆಲ್ಲುವ ರಾಶಿ!
ಕಂಡ ಕಂಡ ಹೊಲ ಮೇಯುವ ಗೂಳಿ
ಸಿಕ್ಕ ಸಿಕ್ಕೆಡೆಯೆಲ್ಲಾ ದಾಳಿ
ಹೋರಿ ಹುಟ್ಟಿದ್ದು ವೃಷಭ ರಾಶಿ
ಸಂಕಲನ, ವ್ಯವಕಲನ
ಕೂಡಿ ಕಳೆಯುವ ಜೀವನ
ಚಿಂತನ-ಮಂಥನ ಸಮ್ಮಿಲನ
ಹಗಲು-ರಾತ್ರಿ, ಸುಖ-ದು:ಖ
ಜೋಡಿಯಾಗಿದ್ದರೆ ಚೆನ್ನ ಮಿಥುನ
ಸಮತ್ವದ ಸುಳಿವಿಲ್ಲ
ಮನಕಿಲ್ಲ ಸಂತುಲನ
ಅಸ್ಥಿರತೆ ಜಾಯಮಾನ
ಬದುಕು ಡೋಲಾಯಮಾನ
ಹುಟ್ಟಿದ್ದು ಮಾತ್ರ ತುಲಾ ರಾಶಿ!
ಎದೆಯೊಳಗೆ ಗುಡಿ ಗೋಪುರ
ಮನದೊಳಗೆ ಓಂಕಾರದ ನೂಪುರ
ಘನ, ಗಂಭೀರ ಸಾಗರ
ತುಳುಕದ ಪೂರ್ಣ ಕುಂಭ
No comments:
Post a Comment